ಸುದ್ದಿ

ಕೊಡ್ಲಿಪೇಟೆ ವಾಹನಗಳ ಹಾಗೂ ಸಾರ್ವಜನಿಕರ ಸುಗುಮ ಸಂಚಾರಕ್ಕೆ ಅವಕಾಶಮಾಡಿಕೊಟ್ಟ ಪೋಲಿಸ್ ಇಲಾಖೆ

ಕೊಡಗು ನ್ಯೂಸ್

ಕೊಡ್ಲಿಪೇಟೆ: ಕೊಡ್ಲಿಪೇಟೆ-ಕೆಲಕೊಡ್ಲಿ ಮಾರ್ಗವಾಗಿ ರಾಯರಕೊಪ್ಪಲು-ಮಗ್ಗೆ-ಭೈರಾಪುರ-ಹಾಸನ ಮಾರ್ಗದ ಕೊಡ್ಲಿಪೇಟೆ ಸರ್ಕಾರಿ ಬಸ್ ನಿಲ್ದಾಣದ ಪ್ರಾರಂಭದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಸ್ಥರು ಕೃತಕವಾದ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಳ್ಳುವುದರ ಮೂಲಕ ಪ್ರತಿ ಭಾನುವಾರ ವ್ಯಾಪಾರ ವಹಿವಾಟು ಮಾಡುವ ಮೂಲಕ, ರೈತಾಪಿ ವರ್ಗ, ವಾಹನಗಳ ಚಾಲಕ ಮತ್ತು ಮಾಲೀಕರು ಹಾಗೂ ಇನ್ನತರೆ ಎಲ್ಲಾ ವರ್ಗದ ಪಾದಾಚಾರಿಗಳಿಗೆ ತೀರ್ವ ತರಹದ ಅಡಚಣೆಯಾಗುತ್ತಿದ್ದು, ಇದನ್ನು ಕಳೆದ ವಾರ ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯಲ್ಲಿ ಶನಿವಾರ ಸಂತೆ ವೃತ್ತ ನಿರೀಕ್ಷಕರಾದ ಜಿ ಕೃಷ್ಣರಾಜ್ ಅವರ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಸಾರ್ವಜನಿಕರು ಮನವಿ ಮಾಡಿಕೊಂಡಾಗ ವೃತ್ತ ನಿರೀಕ್ಷಕರು ಖುದ್ದು ವೀಕ್ಷಣೆ ಮಾಡುವ ಮೂಲಕ ಪರಿಸ್ಥಿತಿಯ ಗಂಭೀರತೆ ಅರಿತು ಭಾನುವಾರ ವೃತ್ತ ನಿರೀಕ್ಷಕರಾದ ಜಿ ಕೃಷ್ಣರಾಜ್ ಮಾರ್ಗ ದರ್ಶನದಂತೆ ಪಿ ಎಸ್ ಐ ಚಂದ್ರು ಅವರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳು ರಸ್ತೆಯ ಒಂದು ಮಗ್ಗಲಿನಲ್ಲಿ ಬ್ಯಾರಿಕೇಡ್ ಹಾಕಿ ಕೃತಕವಾದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವುದರ ಮೂಲಕ, ವಾಹನ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಮೀಸಲಿರುವ ರಸ್ತೆಯನ್ನು ವಾಹನಗಳ ಓಡಾಟಕ್ಕೆ ಮಾತ್ರ ಅನುವುಮಾಡಿ ಕೊಟ್ಟಿರುತ್ತಾರೆ ಮಂದಿನ ದಿನಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆದರೆ ಎರಡೂ ಬದಿಗಳಲ್ಲಿ ಕೃತಕ ಅಂಗಡಿ ಮುಂಗಟ್ಟುಗಳು ಹಾಕುವುದನ್ನು ನಿಷೇಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ

ವರದಿಗಾರರು

ಫ್ರೆಡ್ಡಿ ಪಿಸಿ

Related Articles

Leave a Reply

Your email address will not be published. Required fields are marked *

Back to top button