ಸುದ್ದಿ

ಕೊಡಗು: ಸಾರ್ವಜನಿಕ ಗಣೇಶೋತ್ಸವ ಮಂಡಳಿ ಜೊತೆ ಪೊಲೀಸ್ ಇಲಾಖೆ ಶಾಂತಿ ಸಭೆ

ಶನಿವಾರಸಂತೆ : ಶನಿವಾರಸಂತೆ ಆರ್ ವಿ ಕಲ್ಯಾಣ ಮಂಟಪದಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ಈ ದಿನ ಪೊಲೀಸ್‌ ಇಲಾಖೆ ವತಿಯಿಂದ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದ ಡಿ ವೈ ಎಸ್ ಪಿ ಗಂಗಾಧರಪ್ಪ ಅವರು, ಈ ಬಾರಿ ಸಾರ್ವಜನಿಕವಾಗಿ ಗಣೇಶೋತ್ಸವ ಕಮಿಟಿಗಳಿರುವ ಜಾಗದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಕಲೇಬೇಕು. . ಹಾಗೆಯೇ, ಗಣೇಶನ ಕೂರಿಸುವ ಜಾಗದಲ್ಲಿ ಬೆಂಕಿ ನಂದಿಸುವ ಸಿಲಿಂಡ‌ರ್ ಇಟ್ಟುಕೊಳ್ಳಬೇಕು. ಅದರಂತೆ ಗಣೇಶ ಮಂಡಳಿ ಆಯೋಜಕರು ಅಥವಾ ಅವರ ಪರವಾಗಿ ಓರ್ವರನ್ನು ಆಯಾ ಮಂಡಳಿಗಳಿರುವ ಜಾಗದಲ್ಲಿ ನೇಮಿಸಬೇಕು,ಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಗಮನ ಹರಿಸಬೇಕು ಎಂದರು,ಪೊಲೀಸ್‌ ಇಲಾಖೆಯ ಕಾನೂನುಗಳು ಹಬ್ಬ ಹರಿದಿನಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಡೆ-ತಡೆ ಎಂದುಕೊಳ್ಳದೇ ಅದು ನಿಮ್ಮ ಒಳಿತಿಗೆ ಎಂದು ಭಾವಿಸಿ ಇಲಾಖೆಗೆ ಅನುಕೂಲಕರವಾಗುವ ರೀತಿಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಬೇಕು ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಯಾವೆಲ್ಲಾ ಕಡೆ ಸಾರ್ವಜನಿಕವಾಗಿ ಗಣಪತಿ ಕೂರಿಸಲಾಗುತ್ತದೆ ಎಂಬ ಬಗ್ಗೆ ಪೊಲೀಸ್‌ ಇಲಾಖೆಗೆ ಮಂಡಳಿಯವರು ಮಾಹಿತಿ ನೀಡಬೇಕು. ಮೈಕ್ ಅಳವಡಿಕೆ ಸೇರಿದಂತೆ ಮಂಡಳಿಯಿಂದ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಪೊಲೀಸ್‌ ಇಲಾಖೆಗೆ ನೀಡಿದ್ದಲ್ಲಿ ಬಂದೋಬಸ್ತ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯ. ಇನ್ನಿತರೆ ಪರವಾನಗಿಗೆ ಮಂಡಳಿಯು ಮುಂಚಿತವಾಗಿ ಸಿದ್ಧರಿರಬೇಕು. ಡಿಜೆ ಅಳವಡಿಕೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿಯಿಲ್ಲ. ಅದರಂತೆ ಗಣೇಶನ ಕೂರಿಸುವ ಜಾಗದಲ್ಲಿ ಅಥವಾ ಬೇರೆ ಕಡೆ ಹಾಕಲಾಗುವ ಪ್ಲೆಕ್ಸ್ ಮತ್ತು ಬ್ಯಾನರ್‌ಗಳಿಗೆ ಅಥವಾ ಗ್ರಾಮ ಪಂಚಾಯತ್‌ನಿಂದ ಅನುಮತಿ ತೆಗೆದುಕೊಳ್ಳುವುದು ಅಗತ್ಯ ಎಂದು ಡಿವೈಎಸ್‌ಪಿ ಗಂಗಾಧರಪ್ಪ ತಿಳಿಸಿದರು. ಈ ಸಂದರ್ಬದಲ್ಲಿ ಶನಿವಾರಸಂತೆ ವೃತ್ತ ನಿರೀಕ್ಷಕರಾದ ಪ್ರೀತಮ್ ಡಿ ಶ್ರೇಯಕರ್ ಪಿ ಎಸ್ ಐ ಗೋವಿಂದರಾಜ್ ಸಿಬ್ಬಂದಿಗಳಾದ ಪ್ರದೀಪ್, ಹರ್ಷ, ಕೇಶವ ಹಾಗೂ ಗಣಪತಿ ಮಂಡಳಿಯ ಅಧ್ಯಕ್ಷರು , ಪದಾಧಿಕಾರಿಗಳು ಉಪಸ್ಥಿತರಿದ್ದರು

ಫ್ರೆಡ್ಡಿ ಪಿಸಿ

ತಾಲ್ಲೂಕು ವರದಿಗಾರರು

Johnson J

Johnson Reporter Kodagu

Related Articles

Leave a Reply

Your email address will not be published. Required fields are marked *

Back to top button