ಸಿನಿಮಾ

ನಟ ದರ್ಶನ್ ಆಸ್ಪತ್ರೆಗೆ ದಾಖಲಾಗಲಿದ್ದು, ನಾಳೆ ಶಸ್ತ್ರಚಿಕಿತ್ಸೆ

ಮಂಡ್ಯ : ಇಂದು ನಟ ದರ್ಶನ್ ಆಸ್ಪತ್ರೆಗೆ ದಾಖಲಾಗಲಿದ್ದು, ನಾಳೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅರೇ..ದರ್ಶನ್ ಗೆ ಏನಾಯ್ತು…? ಏನಿದು ಆಪರೇಷನ್ ಎಂದು ಯೋಚಿಸ್ತಿದ್ದೀರಾ..ಮುಂದೆ ಓದಿ.

ಇಂದು ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ನಟ ದರ್ಶನ್ ಕೂಡ ಭಾಗಿಯಾಗಿದ್ದರು.

ಅವರ ಒಂದು ಕೈಯನ್ನು ತೂಗು ಹಾಕಲಾಗಿತ್ತು, ಅವರ ಕೈಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಅವರು ಆಪರೇಷನ್ ಗೆ ಒಳಗಾಗಲಿದ್ದಾರೆ.

ಇಂದು ನಡೆದ ಬಹಿರಂಗ ಸಭೆಯಲ್ಲಿ ನಟ ದರ್ಶನ್ ಈ ವಿಚಾರ ಬಹಿರಂಗಪಡಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು ಇಂದು ಆಸ್ಪತ್ರೆಗೆ ಅಡ್ಮಿಟ್ ಆಗಿ ನಾಳೆ ಆಪರೇಷನ್ ಮಾಡಿಸಿಕೊಳ್ಳಲಿದ್ದೇನೆ, ಅಮ್ಮನಿಗೆ ಮೊದಲೇ ಡೇಟ್ ಕೊಟ್ಟಿದ್ದೇ ಹಾಗಾಗಿ ಇಂದು ಬಂದೆ ಎಂದು ನಟ ದರ್ಶನ್ ಹೇಳಿದರು. ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರ ಕೈಗೆ ಬೆಲ್ಟ್ ಹಾಕಲಾಗಿದೆ.

Naveen Kumar

Managing Editor

Leave a Reply

Your email address will not be published. Required fields are marked *

Back to top button