ಸುದ್ದಿ

ಬಿಬಿಎಂಪಿ ಎ ಈ ಈ ಇಂಜಿನಿಯರ್ ರೋಹಿತ್ ಗೂಂಡಾಗಿರಿ

ಇವನ ಮುಖ ಒಮ್ಮೆ ಸರಿಯಾಗಿ ನೋಡಿ, ಹೆಸರು ರೋಹಿತ್ ಅಂತ ಇವನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ ) ಬೊಮ್ಮನಹಳ್ಳಿ ವಲಯ ಉತ್ತರಹಳ್ಳಿ ಉಪ ವಿಭಾಗದ ಎ ಈ ಈ ಇಂಜಿನಿಯರ್ ರೋಹಿತ್ , ಅಕ್ರಮ ಕಟ್ಟಡಗಳ ದೂರಿನ ಬಗ್ಗೆ ವಿಚಾರಿಸಲು ಹೋದರೆ ಸುಳ್ಳು ಅಟ್ರಾಸಿಟಿ ಕೇಸ್ ಫೈಲ್ ಮಾಡಿಸೋ ಬೆದರಿಕೆ ಒಡ್ಡುತ್ತಾನೆ . ಸಾರ್ವಜನಿಕ ಸಂದರ್ಶನದ ಸಮಯದಲ್ಲಿ ಈತ ಸಿಗೋದೇ ಇಲ್ಲ , ಈತನನ್ನು ಹುಡುಕೋದೇ ಸಾರ್ವಜನಿಕರಿಗೆ ಒಂದು ದೊಡ್ಡ ಸವಾಲು . ಸದಾ ನಾನು ಡಿಸಿಎಂ ಡಿ ಕೆ ಶಿವಕುಮಾರ್ ಶಿಷ್ಯ ಎಂದು ತನ್ನನ್ನು ತಾನೆ ಹೇಳಿಕೊಳ್ಳೋ ಈತ ಯಾರಿಗೂ ಕೇರ್ ಮಾಡಲ್ಲ ಅನ್ನೋ ಆರೋಪ ಇದೆ . ಈತ ಈತನ ಮೇಲಿನ ಅಧಿಕಾರಿಗಳಿಗೂ ಕೇರ್ ಮಾಡಲ್ಲ, ದೂರಿಗೆ ಉತ್ತರ ನೀಡಲ್ಲ ನಿಮ್ಮ ಕೈಲಿ ಏನಾಗುತ್ತೋ ಅದನ್ನ ಮಾಡಿ ಅನ್ನೋ ಜಾಯಮಾನದವನು.

ಮಾಧ್ಯಮದವನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾನೆ, ಕೊಟ್ಟ ದೂರಿನ ಬಗ್ಗೆ ವಿಚಾರಿಸಲು ಹೋದರೆ ದೂರುದಾರರಿಗೆ ಹೊಡೆಯಲು ಬರುತ್ತಾನೆ, ಇವನು ಹೊಡೆಯಲು ಬರುವಾಗ ಸುಬ್ರಮಣ್ಯ ಪುರ ಹೊಯ್ಸಳ ಪೊಲೀಸರು ಕೂಡ ನಿಸಹಾಯಕರಾಗಿ ನಿಲ್ಲುತ್ತಾರೆ. ಇವನನ್ನು ತಡೆಯೋ ಧೈರ್ಯ ಪೊಲೀಸರಿಗೂ ಇಲ್ಲ. ಈತ ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಬರುತ್ತಿದ್ದರೆ ಇವನನ್ನು ತಡೆಯೋ ಬದಲು ಹೊಯ್ಸಳ ಎ ಎಸ್ ಐ ಹಾಗೂ ಸಿಬ್ಬಂದಿ ಮಾಧ್ಯಮದವರನ್ನೇ ತಡೆಯಲು ಬರುತ್ತಾರೆ ಈತನನ್ನು ತಡೆಯೋ ಧೈರ್ಯ ಮಾಡಲೇ ಇಲ್ಲ.

ಸೈಕೋ ಥರ ವರ್ತಿಸೋ ಇವನು ಶಾರ್ಟ್ ಟೆಂಪೆರ್ಡ್ ಎದುರುಗಡೆ ಯಾರು ಇದ್ದರೂ ಕೇರ್ ಮಾಡಲ್ಲ. ಈತನ ಆಫೀಸ್ ನಲ್ಲಿ ಸಿಸಿಟಿವಿ ಕೆಲಸ ಮಾಡುವುದಿಲ್ಲ , ಇದನ್ನೇ ಉಪಯೋಗ ಮಾಡಿಕೊಂಡ ಈತ ಆಫೀಸ್ ಗು ಸರಿಯಾಗಿ ಬರೋದಿಲ್ಲ , ಫೈಲ್ ಗಳನ್ನೂ ಹೊರಗೆ ಎಲ್ಲೋ ಹೋಟೆಲ್ ಗೆ ತರಿಸಿಕೊಂಡು ಸಹಿ ಹಾಕುತ್ತಾನೆ ಎನ್ನೋ ಆರೋಪ ಈತನ ಮೇಲಿದೆ. ಇನ್ನಾದರೂ ಬೊಮ್ಮನಹಳ್ಳಿ ವಲಯ ಆಯುಕ್ತರು ಈತನ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡು ಮುಂದೆ ಸಾರ್ವಜನಿಕರ ಎಲ್ಲ ದೂರುಗಳಿಗೂ ಸ್ಪಂದಿಸಿ ಉಪ ವಿಭಾಗದಲ್ಲಿ ಅಕ್ರಮ ತಡೆಯುವ ಕೆಲಸ ಮಾಡುವಂತೆ ಎಚ್ಚರಿಕೆ ನೀಡಬೇಕಾಗಿದೆ.

Naveen Kumar U

Managing Editor

Related Articles

Leave a Reply

Your email address will not be published. Required fields are marked *

Back to top button