ಸುದ್ದಿ

ಕೊಡ್ಲಿಪೇಟೆ ಅಟೋ ಚಾಲಕ ಮತ್ತು ಮಾಲೀಕರಿಗೆ ಸಂಚಾರಿ ನಿಯಮ ಪಾಲಿಸುವ ಕುರಿತು ಸಭೆ

ಕೊಡ್ಲಿಪೇಟೆ: ಶನಿವಾರಸಂತೆ ಪೋಲೀಸ್ ಠಾಣೆಗೆ ಹೊಸದಾಗಿ ವರ್ಗಾವಣೆಯಾಗಿ ಬಂದಿರುವ ವೃತ್ತ ನಿರೀಕ್ಷಕರಾದ ಜಿ ಕೃಷ್ಣರಾಜ್ ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯಲ್ಲಿ , ಸೋಮವಾರ ಆಟೋ ಚಾಲಕರ ಸಭೆ ನಡೆಸಿ ಕಾನೂನಾತ್ಮಕವಾಗಿ ಆಟೋಚಾಲನೆ ಬಗ್ಗೆ ತಿಳುವಳಿಕೆ ನೀಡಿದರು.
ಕಡ್ಡಾಯವಾಗಿ ಚಾಲನ ಪರವಾನಿಗೆ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಯೂನಿಪಾರಂ ಕಡ್ಡಾಯವಾಗಿ ಧರಿಸಬೇಕು. ಕುಡಿದು ಆಟೋ ಚಾಲನೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ಬಸ್ ನಿಲ್ದಾಣದಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿ ಆಟೋ ನಿಲುಗಡೆ ಮಾಡಿರುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಸಾರ್ವಜನಿಕರು ಬಸ್‌ ನಿಲ್ದಾಣದ ಬಳಿ ಹಾಗೂ ಮುಖ್ಯ ರಸ್ತೆಯ ಬದಿಯಲ್ಲಿ ಅವೈಜ್ಞಾನಿಕ ಪಾರ್ಕಿಂಗ್ ಬಗ್ಗೆ ಉಲ್ಲೇಖಿಸಿದ ವೃತ್ತ ನಿರೀಕ್ಷಕರು, ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥಿತವಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಹಾಗಾಗಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸುವುದು ಅನಿವಾರ್ಯವಾಗಿದೆ.

ಭಾನುವಾರ ಸಂತೆ ದಿನದಂದು ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯ ಎರಡೂ ಬದಿಗಳಲ್ಲಿ ಸಂತೆ ಅಂಗಡಿ ಮುಂಗಟ್ಟುಗಳು ಹಾಕುವುದನ್ನು ನಿಷೇಧಿಸಿದ್ದು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಈ ಮಾಹಿತಿಯನ್ನು ತಿಳಿಸಿರುತ್ತಾರೆ ಹಾಗೂ ಅಂಗಡಿ ತೆರೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಕೊಡ್ಲಿಪೇಟೆ ಉಪ ಠಾಣೆಯ ಮುಖ್ಯ ಪೇದೆ ಉದಯ್, ಹರ್ಷ, ಪೇದೆಗಳಾದ ವಿಶ್ವ , ರಂಜಿತ್ ಮಾದ್ಯಮ ವರದಿಗಾರರಾದ ಫ್ರೆಡ್ಡಿ ಪಿ ಸಿ, ರಘು ಅಟೋ ಚಾಲಕರು ಮತ್ತು ಮಾಲೀಕರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button